ಹುಬ್ಬಳ್ಳಿ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಎಂಟು ಜನ ಆರೋಪಿಗಳನ್ನ ಬಂಧನ ಮಾಡುವಲ್ಲಿ ಹುಬ್ಬಳ್ಳಿಯ ಉಪನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಈಗಾಗಲೇ ಹು-ಧಾ ಮಹಾನಗರವನ್ನು ಗಾಂಜಾ ಮುಕ್ತ ಮಾಡಲು ಪಣತೊಟ್ಟಿರುವ ಹು-ಧಾ ಪೊಲೀಸರು ಇದೀಗ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟದ ಬಗ್ಗೆ ಖಚಿತ ಮಾಹಿತಿ ಸಿಗುತ್ತಿದ್ದಂತೆಯೇ ಠಾಣೆಯ ಪಿಐ ಎಮ್.ಎಸ್.ಹೂಗಾರ ಅವರ ನೇತೃತ್ವ ತಂಡ ದಾಳಿ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳ ಹೆಡೆಮುರಿ ಕಟ್ಟಿ ಕಂಬಿ ಹಿಂದೆ ಅಟ್ಟಿದ್ದಾರೆ.
ಬಂಧಿತರನ್ನು ಕಿರಣಕುಮಾರ ಬಮ್ಮಣಗಿ, ಲಕ್ಷ್ಮಣ ನಿಡಗುಂದಿ, ಮಹಬೂಬ ಊಂಟವಾಲೆ, ಹರ್ಷಿತ್ ಶಂಕರ ವಾಲ್ಮೀಕಿ, ಸಮಂತ್ ವೀರಭದ್ರ ಎಂದು ಗುರುತಿಸಲಾಗಿದೆ. ಈ ಕುರಿತು ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಗುಳೇಶ, ಬಿ.ಆರ್ ಪಮ್ಮಾರ್, ಪ್ರಕಾಶ ಕಲಗುಡಿ, ಶ್ರೀನಿವಾಸ, ರೇಣಪ್ಪ ಸೇರಿದಂತೆ ಇತರರು ಭಾಗಿಯಾಗಿದ್ದರು.
ಇನ್ನೂ ಆರೋಪಿತರ ಪತ್ತೆಯಲ್ಲಿ ವಿಶೇಷ ಕಾರ್ಯನಿರ್ವಹಿಸಿದ ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ರವರ ನೇತೃತ್ವದ ತಂಡದ ಕಾರ್ಯ ವೈಖರಿಯನ್ನು ಕಮೀಷನರ್ ಎನ್.ಶಶಿಕುಮಾರ್ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.