ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಬಸವರಾಜ ಕಟ್ಟಮನಿ ಎಂಬುವವರ ಮನೆಯ ಹಿತ್ತಲಲ್ಲಿ ತಾಯಿ ನಾಗರಹಾವು ಹಾಗೂ 25 ಮರಿ ನಾಗರಹಾವುಗಳು ಪತ್ತೆಯಾಗಿವೆ.
ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದ ಬಸವರಾಜ ಕಟ್ಟಮನಿ ಎಂಬುವವರ ಮನೆಯ ಹಿತ್ತಲಲ್ಲಿ ನಾಗರ ಹಾವಿನ ಮರಿಗಳು ಪತ್ತೆಯಾಗಿವೆ.1 / 6ನೆಲದಲ್ಲಿ ಅವಿತಿದ್ದ ತಾಯಿ ನಾಗರಹಾವು ಹಾಗೂ 25 ಮರಿ ನಾಗರಹಾವುಗಳು ಪತ್ತೆಯಾಗಿದ್ದು ಹಾವುಗಳನ್ನು ನೋಡಿ ಜನ ಹೌಹಾರಿದರು.2 / 6ಕಳೆದ ಹಲವು ದಿನಗಳಿಂದ ಬಸವರಾಜ ಕಟ್ಟಿಮನಿ ಎಂಬುವವರ ಮನೆ ಬಳಿ ನಾಗರಹಾವು ಓಡಾಡುತ್ತಿತ್ತು. ಹೀಗಾಗಿ ಉರಗ ತಜ್ಞರನ್ನು ಮನೆಗೆ ಕರೆಸಿದ್ದರು.3 / 6ಉರಗ ತಜ್ಞ ಹಾವಿನ ಬಿಲ ಕಂಡು ಹಿಡಿದು, ನೆಲ ಅಗೆದಾಗ ನೆಲದಲ್ಲಿ ಅವಿತಿದ್ದ ತಾಯಿ ನಾಗರಹಾವು ಹೆಡೆ ಎತ್ತಿ ಹೊರ ಬಂದಿದೆ.4 / 6ತಾಯಿ ನಾಗರಹಾವು ಹೊರ ಬಂದ ಬಳಿಕ 25 ಮರಿ ನಾಗರಹಾವುಗಳನ್ನೂ ಕೂಡ ಹೊರಕ್ಕೆ ತೆಗೆದು ರಕ್ಷಿಸಲಾಗಿದೆ.5 / 6ತಾಯಿ ಹಾವನ್ನು ಹಿಡಯುತಿದ್ದಂತೆಯೇ ಮರಿ ಹಾವುಗಳು ಬಿಲದಿಂದ ಹೊರಕ್ಕೆ ಬಂದಿದ್ದು ಹಾವುಗಳನ್ನು ರಕ್ಷಿಸಿ ಉರಗ ತಜ್ಞರು ಕಾಡಿಗೆ ಬಿಟ್ಟಿದ್ದಾರೆ.6 / 6