ಬೆಂಗಳೂರಿನ ಹಲವೆಡೆ ಭಾರಿ ಪ್ರಮಾಣದಲ್ಲಿ ಮಳೆ ಸುರಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಎಲ್ಲಾ ವಲಯಗಳ ಆಯುಕ್ತರು, ಜಂಟಿ ಆಯುಕ್ತರು ಮತ್ತು ವಲಯಗಳ ಮುಖ್ಯ ಅಭಿಯಂತರರು ಆಯಾ ವಲಯಗಳಲ್ಲಿ ಮಳೆಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಯಲಹಂಕ,ಪೂರ್ವ ಸೇರಿದಂತೆ ಹಲವು ವಲಯಗಳಲ್ಲಿ ಮಧ್ಯರಾತ್ರಿಯವರೆಗೆ ಸಂಚರಿಸಿದ ಮುಖ್ಯ ಆಯುಕ್ತ ಶ್ರೀ ತುಷಾರ್ ಗಿರಿ ನಾಥ್ ಅವರು ಮಳೆ ನೀರು ಸರಾಗವಾಗಿ ಹರಿದು ಹೋಗಲು ತೆಗೆದುಕೊಂಡ ಕ್ರಮಗಳನ್ನು ಪರಿಶೀಲಿಸಿದರು ಮತ್ತು ವಲಯವಾರು ಕಂಟ್ರೋಲ್ ರೂಂ ಗಳನ್ನು ಸಹಾ ಪರಿಶೀಲಿಸಿದರು.
![](https://news1karnataka24x7.com/wp-content/uploads/2023/05/IMG-20230530-WA0108-1024x702.jpg)
![](https://news1karnataka24x7.com/wp-content/uploads/2023/05/IMG-20230530-WA0109-1024x768.jpg)
![](https://news1karnataka24x7.com/wp-content/uploads/2023/05/IMG-20230530-WA0108-1-1024x702.jpg)
![](https://news1karnataka24x7.com/wp-content/uploads/2023/05/IMG-20230530-WA0109-1-1024x768.jpg)
![](https://news1karnataka24x7.com/wp-content/uploads/2023/05/IMG-20230530-WA0107-1024x683.jpg)
![](https://news1karnataka24x7.com/wp-content/uploads/2023/05/IMG-20230530-WA0105.jpg)
![](https://news1karnataka24x7.com/wp-content/uploads/2023/05/IMG-20230530-WA0105.jpg)
![](https://news1karnataka24x7.com/wp-content/uploads/2023/05/IMG-20230530-WA0106-768x1024.jpg)
![](https://news1karnataka24x7.com/wp-content/uploads/2023/05/IMG-20230530-WA0106-1-768x1024.jpg)
![](https://news1karnataka24x7.com/wp-content/uploads/2023/05/IMG-20230530-WA0103-1024x683.jpg)
![](https://news1karnataka24x7.com/wp-content/uploads/2023/05/IMG-20230530-WA0103-1-1024x683.jpg)
![](https://news1karnataka24x7.com/wp-content/uploads/2023/05/IMG-20230530-WA0104.jpg)
ಹಾಗೆಯೇ ವಿಶೇಷ / ವಲಯ ಆಯುಕ್ತರುಗಳೂ ಸಹಾ ಅವರ ವ್ಯಾಪ್ತಿಯ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿನೀಡಿ ಪರಿಶೀಲನೆ ನಡೆಸಿದರು.
ಪಾಲಿಕೆಯ ಎಲ್ಲಾ ಹಿರಿಯ ಅಧಿಕಾರಿಗಳು ಆಯಾ ವಲಯಗಳ ವ್ಯಾಪ್ತಿಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ವ್ಯಾಪ್ತಿಯಲ್ಲಿ ಸಂಚರಿಸಿ ಸೂಕ್ತ ರೀತಿಯ ಕ್ರಮಗಳನ್ನು ಕೈಗೊಂಡರು.
ಪಾಲಿಕೆಯ ಅರಣ್ಯ ಇಲಾಖೆಯ ಅಧಿಕಾರಿಗಳೂ ಸಹಾ ಸನ್ನದ್ಧ ಸ್ಥಿತಿಯಲ್ಲಿದ್ದು ಯಾವುದೇ ವಿಪತ್ತಿನ ಪರಿಸ್ಥಿತಿಯನ್ನು ಎದುರಿಸಿ ನಿರ್ವಹಿಸಲು ಕಾರ್ಯಪ್ರವೃತ್ತರಾಗಿ ದಿನದ 24X7 ಕೆಲಸ ಮಾಡುತ್ತಿದ್ದಾರೆ.
ಸಾರ್ವಜನಿಕರು ಮಳೆಯಿಂದಾಗಿ ತೊಂದರೆಗೆ ಒಳಪಟ್ಟಲ್ಲಿ ಕೂಡಲೇ ಕೇಂದ್ರ ಕಛೇರಿಯ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 1533 ಸಂರ್ಪಕಿಸಲು ಮುಖ್ಯ ಆಯುಕ್ತರು ಕೋರಿದ್ದಾರೆ.